ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ)

ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ|
ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ|
ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ|
ಕಡುಗಲ್ತೀವಿದರಣ್ಯಮಂ ಪುಗಿಸಿದಂ – ಕೈಗೂಡಿಸಲ್ ಪಂತವಂ ||೧||

ಮನುವಿಂದಿನ್ನೆವರಂ ಮಹಾವಿಭವದಿಂ ಸಾಮ್ರಾಜ್ಯಮಂಗೈದ ಪ|
ತ್ತನಮಂ ನಿಟ್ಟಿಸುತೊರ್ಮೆ ನಿಂದರಿನಿಸುಂ; ಮೇಣೊರ್ಮೆಯೋಕೋರ್ವರುಂ|
ನನೆಗೂಸಂ ನೆರೆ ನೋಡಿ ನೋಡಿ, ನುಡಿದರ್ ನೇತ್ರಂಗಳಿಂ ಮತ್ತೆ ಮಾ
ನಿನಿ ತನ್ನಂಬಕದಿಂದೆ ಬಿಳ್ದ ಪನಿಮುತ್ತಂ ಮಾಜಿದಳ್ ಸೀರೆಯಿಂ ||೨||

“ಎಲೆ! ಪ್ರಾಣೇಶ್ವರಿ! ತಕ್ಕುದಲ್ತು ದುಗುಡಂ ಪ್ರಸ್ತಾನದಾರಂಭದೊಳ್|
ಪಲವುಂ ದಂದುಗಮಂತು ರೋಗರುಜೆಯುಂ, ಸಂಕಷ್ಟ ಕಷ್ಟಂಗಳುಂ|
ಸತಿ ಎಮ್ಮುದರಣಾರ್ಥಮಾಗಿ, ಪ್ರಭು ತಾಂ ಕೈಗಾಯ್ದ ಸೌಭಾಗ್ಯಮಂ|
ದೊಲಿದುಂ ತಾಳ್ವುದು – ಭಕ್ತರಕ್ಷಣದೊಳುಂ ‘ದೈವೀ ವಿಚಿತ್ರಾಗತೀ!’” ||೩||

ಎನಸುಂ ಸಂತವಿಡುತ್ತೆ ಚಂದ್ರಮತಿಯಂ, ಮುದ್ದಾಡುತಂ ಬಾಲನಂ,|
ಜನಪಂ ಕೊಂಡು ತಳರ್ದನೆಲ್ಲ ನೆಲಮುಂ ಕಣ್ಮುಂದೆ ಪರ್ಬಿತ್ತು ದೇ|
ವನ ಹಸ್ತಾಬ್ಜದ ಛಾಯೆಯಿರ್ಪುದೆನುತಂ, ನಲ್ಲಳ್ಗೆ ಕೈಗೊಟ್ಟು, ಮೆ|
ಲ್ಲನೆ ಪೋದಂ, ತಡಗಾಲ ಪಜ್ಜೆ ತೊಡರಲ್, ಶಂಕವಂ ರಾಜ್ಯದಿಂ| ||೪||
*****
(ಸುವಾಸಿನಿ ಏಪ್ರಿಲ್ ೧೯೦೩, ಪುಸ್ತಕ ೨, ಅಂಕ ೧೦, ಪುಟ ೨೧೭)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಧುನಿಕ ಕೃಷಿಯನಂತೆ ವೈಜ್ಞಾನಿಕವೆಂದೊಡೆಂತು?
Next post Aeschylus ನ ತ್ರಿವಳಿ ನಾಟಕ ಮಾಲೆ Oresteia

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys